Thursday, October 2, 2008

ನಮಸ್ಕಾರ


ನನ್ನ ಮೊದಲನೆಯ ಬ್ಲಾಗ್ಗೆ ನಿಮ್ಮೆಲ್ಲರಿಗೂ ಸ್ವಾಗತ
ಹೊಸ ಪ್ರಯೋಗದಲ್ಲಿ ಯೆಡುವಿದರೆ, ಆಸೆರೆಗೆ ನಿಮ್ಮ ಕೈ
ಇರಲೆಂದು
ಕೋರುತ್ತೇನೆ.




ವೃತ್ತಿ ಇಂದ ಸದ್ಧ್ಯಕ್ಕೆ ನಿರುದ್ದ್ಯೂಗಿ, ಅಕ್ಕನ ಬಾಣಂತನಕ್ಕೆ ಅಲ್ಲಾರೀ ,ವಿಧ್ಯಾಭ್ಯಾಸ ಮುಂದುವರಿಸಲು ನಿವೃತ್ತಿ.
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ಪಯಣ.

ಹೌದು, ಅಕ್ಕನಿಗೆ ಮಗು ಹುಟ್ಟಿದೆ, "ಗಂಡು ಗಲಿ", "ಕಾರಂಜಿ ಆಂಜನೇಯ ", ಕೆಲವೊಮ್ಮೆ "ಮುರಾರ್ಜಿ ದೆಸಾಯಿಯು" ಹೌದು.ತಿಂಗಳು ಕಳೆದು ಇವತ್ತಿಗೆ ಆರು ದಿನಗಳಾದವು. ೨೪ ವರ್ಷಗಳ ನನ್ನ ಅವಿರೂದೀ ಸ್ಥಾನವನ್ನು ಕಸಿದು ಕೊಂಡಿದ್ದಾನೆ. ಮನೆಯಲ್ಲಿ ಈಗ ಇವನೇ ಕಿರಿಯ. ಲಂಗ್ಗೊಟಿ ಬದಲಾದಷ್ಟೂ ಎಲ್ಲರಿಗೂ ಸಂಭ್ರಮ . ದುಂಡು ಪಾಪನಂತೆ , ನಂದಗೊಪನಂತೆ, ಆಹಾ ಅದೆಷ್ಟು ಮಂತ್ರ ಪುಷ್ಪಾವಳಿ. ಎಲ್ಲೆಡೆ ಹೊಸ ಚೈತನ್ಯ. ಡಿ.ವಿ.ಜಿ ಹೇಳ್ದಂತೆ, ಹೊಸ ಚಿಗುರು, ಹಳೆ ಬೇರು ಕೂಡಿದರೆ ಮರಸೊಬಗು. ಮರದ ಸೊಬಗು ಹೀಗೇ ಬೆಳೆಯಲಿ. ಹಸಿರೊಡೆದು ಉಸಿರು ತಂಪಾಗಲಿ. ಹೊತ್ತಕನಸಿನ ಹೊರೆಯ ಕಣವೊಂದು ನನಸಾಯ್ತು, ಮತ್ತಷ್ಟು ಹೊರುವಂತೆ ಕೃಪೆ ತೋರಲಿ, ದೇವ .

1 comment:

Anonymous said...

Congratulations Adya !!!..