ದೇಶವೆನಾದೀತು ಬರಿ ಗಡಿ ಗೀಟುಗಳನು ಗೀಚುತಿರಲು,
ಸಂಗೀತದ ಶ್ರುತಿಗಳನು ಬಂದೂಕು ಮೀಟುತಿರಲು.
ಮುಗ್ದ ಮನಸುಗಳಲಿ, ರಕ್ತ ಮಾಂಸದ ಹಚ್ಚೆ,
ಹೆಚ್ಚಾಗಿ ಕಾದಿದ್ದ ಮಚ್ಚಿಂದ ಕೊಚ್ಚಿರಲು.
ರಕ್ತದ ಹೊಳೆ, ಕಣ್ಣೀರಿನ ಮಳೆ
ಎಲ್ಲೆಲ್ಲು ಸುರಿದು ಹರಿಯುತಿಹುದು.
ಇದು ದೇಶದ ದೋಷವೋ? ದೋಷಮಯ ದೇಶವೋ?
ಪೆದ್ದುಗುಂಡನ ಮನ ಕೊರಗುತಿಹುದು.
No comments:
Post a Comment