
ಕೆಂಡ ಕೆಂಪಿನ ಸೂರ್ಯ ತಂಪನ್ನು ಸೂಸುತಲಿ,
ಮಂಡೆಯಾ ಮಟ್ಟಕ್ಕೆ ಬಂದು ನಿಂತಿಹನು.
ಚಂದದಾ ಚಂದುಳ್ಳಿ ಸಂಜೆಯಾ ರಾಣಿಯು,
ಮನಸೋತ ಮೈಗಳ ಅಪ್ಪಿ ನಿಂತಿಹಳು.
ನೆತ್ತಿಯಾ ಸುಡುವವನೆ ನೆರಳನ್ನು ಹಾಸುವನು,
ಬಿಸಿಲಿನಾ ಬೆಂಕಿಯೇ ಜ್ಞಾನಜ್ಯೋತಿ.
ಕಾಣದ ಊರಿನ ಮರೆಯಾಚುವವನಾತ,
ನಾಳಿನಾ ಜನರಿಗೆ ದಾರಿದೀಪ.
ಹಣತೆಯಾ ಹಚ್ಚಲವ ಮನದಾನ್ತರಾಳದಲಿ
ನಿರುತವೂ ಕ್ಷೀಣದ ಗಗನ ತಾರೆ,
ತಲೆಬಾಗಿ ನಮಿಸುವನು ಪೆದ್ದುಗುಂಡನು ಆ,
ಆಶದ ಕಿರಣವನು ಬೆಳಗಿದವಗೆ.
ಮಂಡೆಯಾ ಮಟ್ಟಕ್ಕೆ ಬಂದು ನಿಂತಿಹನು.
ಚಂದದಾ ಚಂದುಳ್ಳಿ ಸಂಜೆಯಾ ರಾಣಿಯು,
ಮನಸೋತ ಮೈಗಳ ಅಪ್ಪಿ ನಿಂತಿಹಳು.
ನೆತ್ತಿಯಾ ಸುಡುವವನೆ ನೆರಳನ್ನು ಹಾಸುವನು,
ಬಿಸಿಲಿನಾ ಬೆಂಕಿಯೇ ಜ್ಞಾನಜ್ಯೋತಿ.
ಕಾಣದ ಊರಿನ ಮರೆಯಾಚುವವನಾತ,
ನಾಳಿನಾ ಜನರಿಗೆ ದಾರಿದೀಪ.
ಹಣತೆಯಾ ಹಚ್ಚಲವ ಮನದಾನ್ತರಾಳದಲಿ
ನಿರುತವೂ ಕ್ಷೀಣದ ಗಗನ ತಾರೆ,
ತಲೆಬಾಗಿ ನಮಿಸುವನು ಪೆದ್ದುಗುಂಡನು ಆ,
ಆಶದ ಕಿರಣವನು ಬೆಳಗಿದವಗೆ.
1 comment:
bahala sundaravaagide :)
Post a Comment