Monday, July 26, 2010

PraLaya

ನೀಲಿ ಆಕಾಶವು ರಕ್ತದ ಕಡಲಾಗಿ
ಬಾನಿನ ಛಾವಣಿ ಬಾಣದಿ ಛದುರಿ
ಊರು ಕೇರಿಗಳೆಲ್ಲ ಕಾಣದೆ ಮರೆಯಾಗಿ
ಮಾಡಿದಿಹವು ಶಿವನ ತಾಪದಿಂದಾಗಿ

ನಟರಾಜನಾ ನಾಟ್ಯ ನಡುಕವ ತಂದಿಹುದು
ಢಮರುವ ಢಮರುಗದಿ ದಂಗೆ ಹಬ್ಬಿಹುದು
ಮಿರಿದಂಗದಿ ಮರುಕ ಮೂಡಿಹುದು ಧರೆಯಲ್ಲಿ
ಕಬಳಿಸಿದೆ ದಹನವು ಧರೆಯನಿಂದು

ಇದುವೇ ಅಂತ್ಯದ ಆದಿ
ಇದುವೇ ನಾಶದ ನಾಂದಿ
ಇಲ್ಲಿಂದ ಮುಂದಿನ್ನು ನರಕ ಯಾತ
ನೋಡಲು ನಾನಿರೆನು ಲಯ ಕರ್ತನಾ ನಾಟ್ಯ
ಮುಂದೆ ಕೆಳುವುದೆಲ್ಲ ಪ್ರಳಯ ಗಾಥಾ

No comments: