ಬಹಳ ದಿನಗಳ ನಂತರ ಮತ್ತೆ ಬರಿಯೋ ಸ್ಪೂರ್ತಿ ಬಂದಿದೆ. ಒಂದು ಸಿನಿಮಾ ಹಾಡು ಕೇಳಿ ಸುಪ್ತ ಭಾವನೆಗಳು ಮತ್ತೆ ಜಾಗ್ರಿತಗೊಂಡಿವೆ. ಬಹಳ ಗೊಂದಲದ ಸ್ಥಿಥಿಯಲ್ಲಿದ್ದೀನಿ. ಹೌದು ನನ್ನಂಥಾ ನೂರಾರು ಜನ ಇಲ್ಲಿದ್ದಾರೆ. ಯಾವುದೊ ಅವಕಾಶ ಹುಡುಕಿಬಂದು ಇಲ್ಲೂ ಇಲ್ಲ ಅಲ್ಲೂ ಇಲ್ಲ ಯಂಬ ಅತಂತ್ರ ಸ್ಥಿತಿ. ನೋಡಿ, ಮಾತಿನಲ್ಲೇ ಹೇಗೆ ಗೊಂದಲ ಎದ್ದು ತೋರುತ್ತಿದೆ. ವೊಂದೆಡೆಏನಾದರೂ ಸದಿಸುವ ಛಲ, ಇನ್ನೊಂದೆಡೆ ಸಾಧನೆಗೆ ಕಟ್ಟುತ್ತಿರುವ ಬೆಲೆಯ ಕೊರಗು. ಪ್ರತೀದಿನ ನನ್ನೊಂದಿಗೇ ನನ್ನ ಸಮರ . ಕನ್ನಡಿಯ ಪ್ರತಿಭಿಂಬ, ಅದರ ಹಿಂದಿನ ಚರಿತ್ರೆ, ಅದರ ಮುಂದೆ ಇರಬಹುದಾದಂತ ಭವಿಷ್ಯ, ಎದೆಯ ಗುಂಡಿಗೆ ನಡಗಿಸುತ್ತಿದೆ. ಋಣವಿರುವ ಕರ್ತವ್ಯಗಳನ್ನು ಹೇಗೆ ಕರ್ಯಗತಗೊಳಿಸುತ್ತೇನೋ ಎಂಬ ಚಿಂತೆ. ಲಗಾಮನ್ನು ದೇವನವಶಪಡಿಸಿದ್ದೇನೆ. ಡಿವಿಜಿ ಹೇಳಿದಂತೆ, ಮದುವೆಗೋ ಮಸಣಕೋ, ಬೇಕೆಂದಕಡೆಗೋಡು...